![](https://www.prekshaa.in/sites/prekshaa.in/files/styles/large/public/white_lotus_in_blue_sea_10.jpg?itok=pwxxxPdQ)
ಆದಿಪ್ರಾಸದ ನಿರ್ಬಂಧ ಇಲ್ಲವಾದ ಬಳಿಕ ಮತ್ತೆ ಕನ್ನಡಕ್ಕೆ ಶ್ಲೋಕ ಬರಬಹುದಿತ್ತು ಎಂಬ ಪ್ರಶ್ನೆ ಏಳಬಹುದು. ಇದಕ್ಕೂ ಕಾರಣವಿದೆ. ಆದಿಪ್ರಾಸ ಅಳಿಯುವ ಹೊತ್ತಿಗೆ ಹಳಗನ್ನಡವಿರಲಿ, ನಡುಗನ್ನಡವೂ ಅಳಿದು ಹೊಸಗನ್ನಡದ ಯುಗ ಮೊದಲಾಗಿತ್ತು. ನಾವು ಈ ಮೊದಲೇ ಕಂಡಂತೆ ಶ್ಲೋಕಕ್ಕೆ ಒಗ್ಗುವ ಭಾಷೆ ಹಳಗನ್ನಡವೇ. ಅಷ್ಟೇಕೆ, ಕಂದ-ವೃತ್ತಗಳಿಗೆಲ್ಲ ಇದೇ ಅನಿವಾರ್ಯ. ನಡುಗನ್ನಡ-ಹೊಸಗನ್ನಡಗಳಲ್ಲಿ ಈ ಎಲ್ಲ ಬಂಧಗಳು ನೀರಿಲ್ಲದ ಸರೋವರದ ಮೀನುಗಳಂತೆಯೇ ಸರಿ. ಹೀಗಾಗಿ ಶ್ಲೋಕದ ಪ್ರವೇಶಕ್ಕೆ ನವೋದಯವೂ ಒದಗಿಬರಲಿಲ್ಲ. ಮತ್ತೂ ಮುಂದಿನ ಕಾಲದಲ್ಲಿ ಛಂದಸ್ಸೇ ಬಹಿಷ್ಕೃತವಾದುದು ತಿಳಿದೇ...
![](https://www.prekshaa.in/sites/prekshaa.in/files/styles/large/public/Bells_1.jpg?itok=nzRf9H5b)
ಕರ್ಷಣಜಾತಿಗಳು ಮಾತ್ರಾಜಾತಿಗಳಂತೆಯೇ ಏಕದೇಶಸ್ಥಿರವಾಗಿವೆ. ಈ ಸ್ಥಿರತೆ ಪದ್ಯಬಂಧಗಳ ಚಾಕ್ಷುಷರೂಪದಲ್ಲಿರದೆ ಶ್ರಾವಣರೂಪದಲ್ಲಿ ಕಾಣಸಿಗುತ್ತದೆ. ಅಂದರೆ, ಕರ್ಷಣಜಾತಿಗಳ ಭಾಷಾಪದಗತಿ ಗದ್ಯಕ್ಕಿಂತ ಬಲುಮಟ್ಟಿಗೆ ಬೇರೆ ಎನಿಸದ ಹಾಗೆ ಅನಿಬದ್ಧವಾಗಿ ತೋರುತ್ತದೆ. ಅವುಗಳ ಪದ್ಯಗತಿ ಛಂದಃಪದಗತಿಯ ಮೂಲಕ ಮಾತ್ರ ಉನ್ಮೀಲಿಸಬೇಕು. ಆದುದರಿಂದಲೇ ಇವುಗಳ ಭಾಷಾಪದಗತಿ ಹೇಗೇ ಇದ್ದರೂ ಏಕ / ಆದಿ, ರೂಪಕ, ಖಂಡ ಮತ್ತು ಮಿಶ್ರ ಎಂಬ ನಾಲ್ಕು ಬಗೆಯ ಮೂಲಭೂತ ಲಯಗಳಿಗೆ ಒಗ್ಗುವಂತೆ ಪದ್ಯಗತಿ ಕರ್ಷಣದ ಮೂಲಕ ರೂಪುಗೊಳ್ಳುತ್ತದೆ. ಇದನ್ನು ಸಾಂಗತ್ಯದಂಥ ಒಂದು ಬಂಧ ಶ್ರಾವಣರೂಪದಲ್ಲಿ...
![Pasture](https://www.prekshaa.in/sites/prekshaa.in/files/styles/large/public/Pasture.jpg?itok=2zmZCGaU)
ಈ ಮುನ್ನ ಕಾಣಿಸಿದ ಮಾದರಿಗಳಲ್ಲಿ ಹ್ರಸ್ವ ಮತ್ತು ಮಧ್ಯಮಗಾತ್ರದ ಬಗೆಬಗೆಯ ಅಕ್ಷರ / ಮಾತ್ರಾಘಟಕಗಳನ್ನು ಪರಿಶೀಲಿಸಿದಾಗ ‘ಇವೇ ಪರಿಮಾಣಗಳಲ್ಲಿ ಹೆಚ್ಚಿನ ಭಾಷಾಪದಗಳು ರೂಪುಗೊಳ್ಳುವುವೇ?’ ಎಂಬ ಸಂದೇಹ ಕೆಲವರಲ್ಲಿ ಮೂಡಬಹುದು. ಭಾಷಾಪದಗಳು ತಮ್ಮ ಪರಿಮಾಣದಲ್ಲಿ ಲಯಾನ್ವಿತವಾದ ಛಂದಃಪದಗಳಿಗಿಂತ ಹೆಚ್ಚು-ಕಡಮೆಗಳನ್ನು ಹೊಂದಿರುತ್ತವೆ ಎಂಬುದು ಅವರ ಸಂದೇಹಕ್ಕೆ ಕಾರಣ. ಆದರೆ ಇಂಥ ಸಂಶಯ ನಿಲ್ಲುವಂಥದ್ದಲ್ಲ.
ಭಾರತೀಯಭಾಷೆಗಳು ಪ್ರಾಯಿಕವಾಗಿ ಒಂದೇ ಬಗೆಯ ಪದಪದ್ಧತಿಯನ್ನು ಹೊಂದಿವೆ. ಈ ಮಾತು ಅವುಗಳ ಅಭಿಜಾತಸಾಹಿತ್ಯದ ಮಟ್ಟಿಗಂತೂ ಸತ್ಯ. ನಮ್ಮ ಭಾಷೆಗಳ ಯಾವುದೇ...
![Nature Nature](https://www.prekshaa.in/sites/prekshaa.in/files/styles/large/public/Nature_2.jpg?itok=jbnTO18y)
ಇನ್ನು ಮುಂದೆ ಶ್ಲೋಕದಲ್ಲಿ ಬರಬಹುದಾದ ವಿಭಿನ್ನಸಂಖ್ಯೆಯ ಮಾತ್ರಾಗಣಗಳ ಕೆಲವು ಪ್ರಮುಖ ಸಾಧ್ಯತೆಗಳನ್ನು ಪರಿಶೀಲಿಸೋಣ.
ಅ) ಮೂರು ಮಾತ್ರೆಗಳ ಘಟಕಗಳುಳ್ಳ ರಚನೆ:
ನಾನ | ನಾನ | ನನಾ | ನಾನ/ನಾ | ನಾನ | ನಾನ | ನನಾ | ನನಾ |
ನನಾ | ನನಾ | ನನಾ | ನಾನ/ನಾ | ನನಾ | ನಾನ | ನನಾ | ನನಾ |
ತ್ರಿಮಾತ್ರಾಗಣಗಳೇ ಪ್ರಚುರವಾದ ಈ ಬಗೆಯ ಶ್ಲೋಕದಲ್ಲಿ ಮೂರು ಮಾತ್ರೆಗಳ ಪರಿಮಾಣವನ್ನೇ ಉಳ್ಳ ನ-ಗಣಕ್ಕೆ ಆಸ್ಪದವಿಲ್ಲ. ಅದು ಬಂದೊಡನೆಯೇ ಎರಡು ಗುರುಗಳು ಅವ್ಯವಹಿತವಾಗಿ ಬರಬೇಕಾಗುತ್ತದೆ; ಆಗ ಗತಿಯು ನಾಲ್ಕು ಮಾತ್ರೆಗಳ ಘಟಕಕ್ಕೆ ಅವಕಾಶ ನೀಡಬೇಕಾಗುತ್ತದೆ.[1]
ಆ...
![](https://www.prekshaa.in/sites/prekshaa.in/files/styles/large/public/banyan_3.jpg?itok=FirwZ8aG)
ಪರಿಷ್ಕೃತ ಲಕ್ಷಣ
ಈ ಎಚ್ಚರಿಕೆಗಳ ಹಿನ್ನೆಲೆಯಲ್ಲಿ ಪರಿಶೀಲಿಸಿದಾಗ ಈ ಮುನ್ನ ಹೇಳಿದ ಶ್ಲೋಕದ ಲಕ್ಷಣಗಳು ಪರ್ಯಾಪ್ತವಲ್ಲವೆಂದು ತಿಳಿಯುತ್ತದೆ. ಬಹುಶಃ ಈ ಕಾರಣದಿಂದಲೇ ಮಧ್ಯಕಾಲೀನ ಛಂದೋವಿದರು ಇನ್ನಷ್ಟು ಪರಿಷ್ಕೃತವಾದ ಲಕ್ಷಣವನ್ನು ರೂಪಿಸಿದ್ದಾರೆ. ಉದಾಹರಣೆಗೆ ‘ವೃತ್ತರತ್ನಾಕರ’ದ ನಾರಾಯಣಭಟ್ಟೀಯ ವ್ಯಾಖ್ಯೆಯು ಶ್ಲೋಕದ ಎಲ್ಲ ಪಾದಗಳ ಮೊದಲ ನಾಲ್ಕು ಅಕ್ಷರಗಳ ವಿನ್ಯಾಸಗಳಿಗೂ ಅನ್ವಯಿಸುವಂಥ ಕೆಲವೊಂದು ನಿಯಮಗಳನ್ನು ರೂಪಿಸಿದೆ (೨.೨೧). ಅವು ಹೀಗಿವೆ:
ಪ್ರತಿಯೊಂದು ಸಾಲಿನ ಮೊದಲ ಹಾಗೂ ಕೊನೆಯ ಅಕ್ಷರಗಳ ಗುರುತ್ವ ಅಥವಾ ಲಘುತ್ವಗಳಲ್ಲಿ ಐಚ್ಛಿಕತೆ ಉಂಟು. ಆದರೆ...
![](https://www.prekshaa.in/sites/prekshaa.in/files/styles/large/public/Mountain_2.jpg?itok=evQ10UPY)
೨. ವಿಷಮಪಾದದ ಉತ್ತರಾರ್ಧದಲ್ಲಿ ಲಘುಬಾಹುಳ್ಯವುಳ್ಳ ಸಂದರ್ಭಗಳಲ್ಲಿ ಆಯಾ ಓಜಪಾದಗಳ ಪಂಚಮಾಕ್ಷರಗಳು ಲಘು ಅಥವಾ ಗುರುವೇ ಆಗಿರಲಿ, ಮೇಲಣ ಎಚ್ಚರಿಕೆಯನ್ನು ಪಾಲಿಸಿದ್ದೇ ಆದಲ್ಲಿ ಶ್ಲೋಕದ ಧಾಟಿ ಕೆಡುವುದಿಲ್ಲ. ಇಂತಿದ್ದರೂ ಪಂಚಮಾಕ್ಷರವು ‘ಲಕ್ಷಣವಿರುದ್ಧ’ವಾಗಿ ಗುರುವಾದಲ್ಲಿ ಒಟ್ಟಂದದ ಶ್ಲೋಕಗತಿಗೆ ಹೆಚ್ಚಿನ ಸೊಗಸು ಬರುತ್ತದೆ. ಉದಾ:
ಷಾಣ್ಮಾತುರಃ ಶಕ್ತಿಧರಃ ಕುಮಾರಃ ಕ್ರೌಂಚದಾರಣಃ || (ಅಮರಕೋಶ, ೧.೧.೪೭)
ಆದರೆ ಓಜಪಾದದ ಪೂರ್ವಾರ್ಧವು ಗುರುಗಳಿಂದಲೇ ತುಂಬಿದ್ದರೆ - ವಿಶೇಷತಃ ಮೂರು ಹಾಗೂ ನಾಲ್ಕನೆಯ ಅಕ್ಷರಗಳು ಗುರುಗಳಾಗಿದ್ದರೆ - ಐದನೆಯ ಅಕ್ಷರವು...
![](https://www.prekshaa.in/sites/prekshaa.in/files/styles/large/public/Banyan%20Tree%202_1.jpg?itok=hKzPW4yG)
‘ಶ್ಲೋಕ’ ಎಂಬ ಪದ್ಯಪ್ರಕಾರವು ಸಾಲಿಗೆ ಎಂಟರಕ್ಷರಗಳಂತೆ ನಾಲ್ಕು ಪಾದಗಳನ್ನುಳ್ಳ ಅನುಷ್ಟುಪ್ವರ್ಗದ ಛಂದಸ್ಸುಗಳಲ್ಲಿ ಒಂದು ಪ್ರಭೇದವಾದರೂ ಇದಕ್ಕೆ ಇಡಿಯ ಆ ವರ್ಗದ ಹೆಸರೇ ರೂಢವಾಗಿದೆ. ಈ ವೈಚಿತ್ರ್ಯಕ್ಕೆ ಕಾರಣ ಅದರ ಪ್ರಾಚುರ್ಯ ಮತ್ತು ವೈದಿಕಸಾಹಿತ್ಯದ ಅನುಷ್ಟುಪ್ಪಿನೊಡನೆ ಅದಕ್ಕಿರುವ ನೈಕಟ್ಯ-ಸಾದೃಶ್ಯಗಳೇ ಆಗಿವೆ. ಸಾಮಾನ್ಯವಾಗಿ ಸಮೂಹವೊಂದರಲ್ಲಿ ಹೆಚ್ಚು ಪ್ರಸಿದ್ಧವಾದ ಪ್ರಭೇದವನ್ನು ಇಡಿಯ ಗುಂಪಿನ ಹೆಸರಿನಿಂದಲೋ, ಅಥವಾ ಆ ಗುಂಪನ್ನೇ ತತ್ಸಂಭೂತವಾದ ಪ್ರಭೇದದ ಹೆಸರಿನಿಂದಲೋ ಗುರುತಿಸುವುದುಂಟು. ಗೋಡ್ರೇಜ್ ಕಪಾಟು, ಜೆ಼ರಾಕ್ಸ್ ಯಂತ್ರ, ಜಾಟರ್ ಪೆನ್...