‘ಗೊಲ್ಗೊಥಾ’ ಕಾವ್ಯದ ರಸಸಿದ್ಧಿ
ಉನ್ನತ ಮಟ್ಟದ ವಿದ್ವಾಂಸರೆಂದು ಪ್ರಖ್ಯಾತರಾಗಿದ್ದ ಗೋವಿಂದ ಪೈಗಳಿಗೆ ಶ್ರೇಷ್ಠ ಕವಿಗಳೆಂಬ ಯುಕ್ತ ಖ್ಯಾತಿ ಬಂದದ್ದು ಬಹುಶಃ ‘ಗೊಲ್ಗೊಥಾ’ ಮತ್ತು ‘ವೈಶಾಖಿ’ ಖಂಡಕಾವ್ಯಗಳಿಂದಲೇ. ಇವನ್ನು ಖಂಡಕಾವ್ಯಗಳೆನ್ನುವುದಕ್ಕಿಂತ ಮಹಾಕಾವ್ಯಖಂಡಗಳೆಂದು (Epic Fragments) ಗುರುತಿಸುವುದು ಒಳಿತೆಂಬುದು ಎಸ್. ಅನಂತನಾರಾಯಣ ಅವರ ಅಭಿಪ್ರಾಯ.[1] ಅವರ ಈ ನಿಲವು ಒಪ್ಪುವಂಥದ್ದೇ ಆಗಿದೆ. ಈ ಎರಡು ಕೃತಿಗಳಿಂದಲೇ ಪೈಗಳನ್ನು ನಮ್ಮ ನಾಡಿನ ಮೊತ್ತಮೊದಲ ರಾಷ್ಟ್ರಕವಿಯೆಂದು ಅಂಗೀಕರಿಸಿದಲ್ಲಿ ತಪ್ಪಾಗದು. ಇವನ್ನು ಕುರಿತು ಅನೇಕ ವಿಮರ್ಶಕರೂ ವಿದ್ವಾಂಸರೂ ಸಾಕಷ್ಟು ವಿಶದವಾಗಿ ಬರೆದಿದ್ದಾರೆ. ಇವರ ಪೈಕಿ ಜಿ. ಪಿ. ರಾಜರತ್ನಂ, ರಂ. ಶ್ರೀ. ಮುಗಳಿ, ಜಿ. ವರದರಾಜರಾವ್, ಎಸ್. ಎಂ.