ಆ ಕಾಲದ ಕವಿಗಳ ರೀತಿ-ನೀತಿಗಳು, ವಿವಿಧಕಲೆ-ಕ್ರೀಡೆಗಳ ವಿವರಗಳು, ವೈದಿಕ-ಲೌಕಿಕವೈಭವ-ವಿಶೇಷಗಳು ಮತ್ತಿತರ ಅನೇಕಸ್ವಾರಸ್ಯಗಳನ್ನು ನೋರಿಯವರು ತಮ್ಮ ಈ ಕಾದಂಬರಿಯಲ್ಲಿ ಹದವರಿತು ಬೆಸೆದಿದ್ದಾರೆ. ಶ್ರೀನಾಥನ ಹೆಂಡತಿಯ ತಮ್ಮನೊಬ್ಬನಿದ್ದ. ದುಗ್ಗನನೆಂಬುದು ಆತನ ಹೆಸರು. ಇವನೂ ತೆಲುಗುಕವಿ. “ನಾಚಿಕೇತೂಪಾಖ್ಯಾನ”ವೆಂಬ ಕಾವ್ಯವನ್ನು ಇವನು ಬರೆದಿದ್ದಾನೆ. ಪೋತನನು ಈ ದುಗ್ಗನನ ಸ್ನೇಹಿತ ಹಾಗೂ ಶ್ರೀನಾಥನ ಹೆಂಡತಿಗೆ ಪ್ರೀತಿಯ ಸೋದರಸದೃಶನೆಂದು ನೋರಿಯವರು ಕಲ್ಪಿಸಿದ್ದಾರೆ. ಇವರೆಲ್ಲ ಶ್ರೀನಾಥನಿಗಿಂತ ಇಪ್ಪತ್ತಿಪ್ಪತ್ತೈದು ವರ್ಷಗಳಿಗೆ ಚಿಕ್ಕವರು. ಕವಿಯಾಗಬೇಕೆಂಬ...
Kavi_Sarva_Bowmudu_medium_1.jpg KAVI SARVABHAUMUDU “ಕವಿಸಾರ್ವಭೌಮುಡು” ಒಂದು ಚಿಕ್ಕ ಕಾದಂಬರಿ. ಇದರ ಕಾಲ ಹದಿನೈದನೆಯ ಶತಮಾನ. ಇಲ್ಲಿಯ ಕಥೆಯ ಘಟನಾವಧಿ ಸುಮಾರು ಆರು ತಿಂಗಳು (ಪುಷ್ಯಮಾಸದಿಂದ ಜ್ಯೇಷ್ಠಮಾಸದವರೆಗೆ). ನೋರಿಯವರ ಎಲ್ಲ ಕಾದಂಬರಿಗಳಲ್ಲಿಯೂ ಇತಿವೃತ್ತದ ಘಟನಾವಧಿ ಸೀಮಿತವಾಗಿರುತ್ತದೆ; ಆದರ ಈ ಕ್ಷಿಪ್ರಾವಧಿಯಲ್ಲಿಯೇ ಅನೇಕಘಟನೆಗಳು ನಡೆದುಹೋಗಿ ಕಥಾನಕವು ರೋಚಕವಾದ — ಆದರೆ ವಿಶ್ವಾಸಾರ್ಹವಾದ — ಹತ್ತಾರು ತಿರುವುಗಳನ್ನು ಪಡೆದುಕೊಳ್ಳುತ್ತದೆ. ಇದು ಅವರ ಕಥನತಂತ್ರ ಮತ್ತು...
ಈಚೆಗೆ ನಮ್ಮ ದೇಶದ ಒಳಗೂ ಹೊರಗೂ ಭಾರತೀಯಪರಂಪರೆಯನ್ನು ಕುರಿತು ಕುತೂಹಲ ಮತ್ತು ನವೋತ್ಸಾಹಗಳು ಹೊಮ್ಮಿದಂತೆ ತೋರುತ್ತದೆ. ಈ ಮಾರ್ಪಾಡು ಸ್ವಾಗತಾರ್ಹವೇನೋ ದಿಟ, ಆದರೆ ಅದೆಷ್ಟೋ ಬಾರಿ ಇಂಥ ಕುತೂಹಲ-ಉತ್ಸಾಹಗಳು ಅತಿರೇಕ-ಅವಿವೇಕಗಳಿಂದಲೂ ಅವ್ಯುತ್ಪತ್ತಿ-ಅಸಾಮರ್ಥ್ಯಗಳಿಂದಲೂ ಕೂಡಿರುವುದು ವಿಷಾದಕರ. ವಿಶೇಷತಃ ಪ್ರಾಚೀನಭಾರತೀಯಸಮಾಜ ಮತ್ತು ಇತಿಹಾಸ-ಪುರಾಣಗಳನ್ನು ಆಧರಿಸಿದ ಕಥೆ-ಕಾದಂಬರಿಗಳಂಥ ರಸಪ್ರಧಾನವಾದ ಕಾಲ್ಪನಿಕರಚನೆಗಳನ್ನು ವಿವಿಧಭಾರತೀಯಭಾಷೆಗಳಲ್ಲಿಯೂ — ಎಲ್ಲಕ್ಕಿಂತ ಮಿಗಿಲಾಗಿ ಇಂಗ್ಲಿಷ್ ನಲ್ಲಿಯೂ — ನಡಸುತ್ತಿರುವ ಹೊಸ ಪೀಳಿಗೆಯ ಬರೆಹಗಾರರ...