ಸಾಕಾರಗೊಂಡ ರಾಮಮಂದಿರ
ಇತಿಹಾಸದ ಮುಂಜಾವಿಗೂ ಹಿಂದಿನಿಂದಲೇ ಸಮಸ್ತ ಹಿಂದು ಜನಾಂಗದ ಅಂತರಂಗದಲ್ಲಿ ಮರ್ಯಾದಾಪುರುಷೋತ್ತಮನೆಂದೂ ಭಗವಂತನ ಶ್ರೇಷ್ಠ ಅವತಾರವೆಂದೂ ಉದಾತ್ತ ಜೀವನಮೌಲ್ಯಗಳೆಲ್ಲದರ ಪ್ರತೀಕವೆಂದೂ ಅಧಿಷ್ಠಿತನಾಗಿರುವ ಶ್ರೀರಾಮನ ಜನ್ಮಸ್ಥಾನವನ್ನು ಅದಕ್ಕೆ ಅಂಟಿದ್ದ ಕಲಂಕದಿಂದ ರಾಷ್ಟ್ರವ್ಯಾಪಿ ಆಂದೋಲನದ ಮೂಲಕ ಮುಕ್ತಗೊಳಿಸಿ ಇದೀಗ ಅಲ್ಲಿ ಮಂದಿರನಿರ್ಮಾಣವೂ ನಡೆದಿರುವುದು ಒಂದು ಇತಿಹಾಸಾರ್ಹ ಘಟನೆ.
ಕೆಲವು ಶತಾಬ್ದಗಳಿಂದ ವಿವಿಧ ಕಾರಣಗಳಿಂದಾಗಿ ಅತಿಮಾರ್ದವವನ್ನು ರೂಢಿಸಿಕೊಂಡಿದ್ದ ಹಿಂದು ಸಮಾಜ ಕಾಲಧರ್ಮ ಅಪೇಕ್ಷಿಸಿದಂತೆ ಈಗ ಕ್ಷಾತ್ತ್ರರವನ್ನು ಮರಳಿ ಪಡೆದುಕೊಳ್ಳುತ್ತಿರುವುದರ ಸಂಕೇತವೂ ಇದಾಗಿದೆ.