Vyasa Vata

ವ್ಯಾಸವಟದ ಬೀಳಲುಗಳ ನಡುವೆ

(“ಮಹಾಭಾರತ”ದ ಹಿನ್ನೆಲೆಯಲ್ಲಿ “ಕರ್ಣಾಟಭಾರತಕಥಾಮಂಜರಿ”, “ಕೃಷ್ಣಾವತಾರ” ಮತ್ತು “ಪರ್ವ”ಗಳ ತೌಲನಿಕಚಿಂತನೆ)

ಹಿನ್ನೆಲೆ

ಅರ್ಷಕಾವ್ಯಗಳೆಂದೂ ಇತಿಹಾಸಗಳೆಂದೂ ಹೆಸರಾದ ರಾಮಾಯಣ-ಮಹಾಭಾರತಗಳು ನಮ್ಮ ದೇಶದ ಸಾರಸ್ವತಲೋಕವನ್ನು ಪ್ರಭಾವಿಸಿದಂತೆ ಜಗತ್ತಿನ ಮತ್ತಿನ್ನಾವ ಪ್ರಾಚೀನಕಾವ್ಯಗಳೂ ಆಯಾ ಪ್ರಾಂತಗಳ ಸಾಹಿತ್ಯವನ್ನು ಪ್ರೇರಿಸಿಲ್ಲ. ಈ ಮಾತು ರಾಮಾಯಣ-ಮಹಾಭಾರತಗಳಿಂದ ಪ್ರಭಾವಿತವಾದ ಗೀತ-ನೃತ್ಯ-ನಾಟ್ಯ-ಚಿತ್ರ-ಶಿಲ್ಪಾದಿಗಳಿಗೂ ಸಮಾನವಾಗಿ ಅನ್ವಯಿಸುತ್ತದೆ. ಹೆಚ್ಚೇನು, ನಮ್ಮ ದೇಶದ ಸಮಗ್ರಸಂಸ್ಕೃತಿಯೇ ಇವುಗಳಿಂದ ಉಜ್ಜೀವಿತವಾಗಿದೆ.