Abhinavabharati

“ಅಭಿನವಭಾರತಿ”ಯ ಕೆಲವೊಂದು ವೈಶಿಷ್ಟ್ಯಗಳು—ಉಲ್ಲೇಖಗೊಂಡ ಲೇಖಕರು ಮತ್ತು ಕೃತಿಗಳು, ಭಾಷೆ-ಶೈಲಿ

ಅಭಿನವಭಾರತಿಯಲ್ಲಿ ಉಲ್ಲೇಖಗೊಂಡ ಲೇಖಕರು ಮತ್ತು ಕೃತಿಗಳು

“ಅಭಿನವಭಾರತಿ”ಯ ಕೆಲವೊಂದು ವೈಶಿಷ್ಟ್ಯಗಳು—ನೃತ್ತಕರಣಗಳು

ಅಭಿನವಗುಪ್ತನು ಅಭಿನಯಹಸ್ತಗಳ ವಿನಿಯೋಗವನ್ನು ಕುರಿತಂತೆ ತುಂಬ ವಿಶದವಾಗಿ ವ್ಯಾಖ್ಯಾನವನ್ನು ರಚಿಸಿದ್ದಾನೆ. ಇಲ್ಲಿಯ ವಿವರಗಳು ಯಾರಿಗಾದರೂ ಬೆರಗನ್ನು ತಾರದಿರವು. ಅವನು ಇಷ್ಟಕ್ಕೇ ಸೀಮಿತನಾಗದೆ ಈ ಬಗೆಯ ಹಸ್ತಗಳ ವಿನಿಯೋಗಕ್ಕೆ ಮತ್ತೆಷ್ಟೋ ಎಡೆಗಳನ್ನು ಕಾಣುತ್ತಾನೆ. ಅಂಥ ಒಂದು ಸಂದರ್ಭವು ಚಾರಿಗಳನ್ನು ನಿರ್ವಹಿಸುವಾಗ ಯಾವ ಬಗೆಯಲ್ಲಿ ಹಸ್ತಗಳನ್ನು ಹಿಡಿಯುವುದು ಸಮುಚಿತವೆಂದು ವಿವೇಚಿಸುವುದರಲ್ಲಿದೆ. ಆ ಪ್ರಕಾರ ಅಭಿನವಗುಪ್ತನು ನಾಟ್ಯದಲ್ಲಿ ಅರ್ಧಚಂದ್ರಹಸ್ತವನ್ನೂ ನೃತ್ತದಲ್ಲಿ “ಪಕ್ಷಪ್ರದ್ಯೋತ” ಮತ್ತು “ಪಕ್ಷವಂಚಿತ”ಗಳನ್ನೂ ಒಳಿತೆಂದು ಸೂಚಿಸುತ್ತಾನೆ:

“ಅರ್ಧಚಂದ್ರೋ ನಾಟ್ಯೇ ನೃತ್ತೇ ತು ಪಕ್ಷಪ್ರದ್ಯೋತೌ ಪಕ್ಷವಂಚಿತಾವಪಿ” (ಸಂ. ೨, ಪು. ೭೭).

“ಅಭಿನವಭಾರತಿ”ಯ ಕೆಲವೊಂದು ವೈಶಿಷ್ಟ್ಯಗಳು—ಛಂದಸ್ಸು, ವಾಚಿಕಾಭಿನಯ

ಛಂದಸ್ಸು

ನಾಟ್ಯಶಾಸ್ತ್ರವು ಛಂದೋವಿಚಿತಿಯನ್ನು ಕುರಿತು ಬೆಲೆಯುಳ್ಳ ಎಷ್ಟೋ ವಿಚಾರಗಳನ್ನು ಹೇಳಿದ್ದರೂ ಅಭಿನವಗುಪ್ತನು ತಕ್ಕ ರೀತಿಯಲ್ಲಿ ನ್ಯಾಯ ಸಲ್ಲಿಸಿದಂತೆ ತೋರದು. ಆದರೂ ಅವನ ಛಂದಸ್ಸೂಕ್ಷ್ಮಗಳ ಅರಿವು ಹಿರಿದಾದುದೆಂಬುದರಲ್ಲಿ ಸಂದೇಹವಿಲ್ಲ. ಅದಕ್ಕೆ ಕೇವಲ ಒಂದೇ ಒಂದು ನಿದರ್ಶನವನ್ನು ನಾವಿಲ್ಲಿ ಗಮನಿಸಬಹುದು. ಅದು ವಿವಿಧಚ್ಛಂದಸ್ಸುಗಳ ಪಾಠ್ಯತ್ವ ಮತ್ತು ಗೇಯತ್ವಗಳಿಗೆ ಸಂಬಂಧಿಸಿದ ವಿವೇಕ.

“ಅಭಿನವಭಾರತಿ”ಯ ಕೆಲವೊಂದು ವೈಶಿಷ್ಟ್ಯಗಳು — ದಶರೂಪಕ

ದಶರೂಪಕ

ನಾಟ್ಯಶಾಸ್ತ್ರದ ಮುಖ್ಯಾಧಿಕರಣಗಳಲ್ಲೊಂದು ದಶರೂಪಕಾಧ್ಯಾಯ. ದೃಶ್ಯಕಾವ್ಯವನ್ನು ವಿವಿಧರೀತಿಯ ನಾಟ್ಯರಸಿಕರ ರುಚಿಭೇದಗಳನ್ನು ಗಮನಿಸಿಕೊಂಡು ಹತ್ತು ಹನ್ನೊಂದು ಬಗೆಯ (ಹನ್ನೊಂದನೆಯದು “ನಾಟಿಕಾ” ಎಂಬ ಪ್ರಕಾರ. ಇದು ಮುಂದೆ “ಉಪರೂಪಕ”ಗಳ ವರ್ಗಕ್ಕೆ ಸೇರಿತು) ವಿಭಾಗಗಳಾಗಿ ವಿಂಗಡಿಸಲಾಗಿದೆ. ಈ ಬಗೆಗೆ ವಿ. ರಾಘವನ್ ವ್ಯಾಪಕವಾದ ಅಧ್ಯಯನವನ್ನೇ ನಡಸಿದ್ದಾರೆ[1]. ಇಲ್ಲಿ ದಶರೂಪಕದ ಪರಿಕಲ್ಪನೆಯು ಭಾರತೀಯರಂಗಸಾಹಿತ್ಯದಲ್ಲಿ ಹೇಗೆ ಬೆಳೆದುಬಂದಿತೆಂಬ ದಿಕ್ಸೂಚಿಯಿದೆ. ನಾವಿಲ್ಲಿ ಕೇವಲ ಅಭಿನವಗುಪ್ತನ ಮತವನ್ನು ಮಾತ್ರ ಕೇಂದ್ರೀಕರಿಸೋಣ.

“ಅಭಿನವಭಾರತಿ”ಯ ಕೆಲವೊಂದು ವೈಶಿಷ್ಟ್ಯಗಳು — ಧರ್ಮಿಗಳು

ಇಂಥ ಎಷ್ಟೋ ಸಂಗತಿಗಳನ್ನು ಧ್ವನಿಸುವಂಥ ಬೆಲೆಯುಳ್ಳ ವಿವರಣೆಯನ್ನು ಅಭಿನವಗುಪ್ತ ನೀಡಿದ್ದಾನೆ. ಅವನ ಪ್ರಕಾರ ಉಭಯಧರ್ಮಿಗಳೂ ಲೋಕಸ್ವಭಾವದಲ್ಲಿಯೇ ಪರಮಾರ್ಥತಃ ನೆಲೆಗೊಂಡಿವೆ. ಲೋಕವೆಂದರೆ ನಮ್ಮ ಸುತ್ತಣ ಜಗತ್ತು. ಇದು ಅಲ್ಲಿಯ ಜನಜೀವನದ ಸಕಲಾಂಶಗಳನ್ನೂ ಒಳಗೊಂಡಿದೆ. ಹೀಗಾಗಿ “ಪ್ರವೃತ್ತಿ”ಯಲ್ಲಿ ಸಾಮಾನ್ಯವಾಗಿ ತೋರಿಕೊಳ್ಳುವ ಎಲ್ಲ ಸಂಗತಿಗಳೂ ಇಲ್ಲಿಗೆ ಅನ್ವಯಿಸುತ್ತವೆ. ಆದುದರಿಂದ “ಲೋಕಧರ್ಮಿ”ಯು ಕೆಲವೊಂದಂಶಗಳಲ್ಲಿ “ಪ್ರವೃತ್ತಿ”ಗೆ ನಿಕಟಬಂಧು. ನಾಟ್ಯವು ಬಲುಮಟ್ಟಿಗೆ ಲೋಕಾಶ್ರಿತವಾದ ಕಾರಣ “ಲೋಕಧರ್ಮಿ”ಯೊಂದೇ ಪಾರಮ್ಯವನ್ನು ತಾಳುವುದೆಂದು ಹೇಳಬಹುದಾದರೂ ರಂಜನೋತ್ಕರ್ಷಕ್ಕಾಗಿ ರಂಗಪ್ರಯೋಗದ ನಿರ್ವಾಹಾನುಕೂಲತೆಗಾಗಿ ಅನುಸರಿಸುವ ಕವಿ-ನಟಪ್ರಸಿದ್ಧಸಮಯರೂಪದ ನಾಟ್ಯಧರ್ಮಿಗೂ ಎಡೆಯುಂಟು.